ಹಡೆದವ್ವನ ನೆನಪು

ಹಾದಿ ಬೀದಿಯ ಗುಂಟ
ತಂಪು ನೆರಳಿನ ಸಾಲು
ತಂಗಾಳಿ ತೀಡಿ,
ಮುಂಗುರುಳು ಮೋಡಿ
ಮಲ್ಲಿಗೆಯ ನರುಗೆಂಪು
ಬಾನಾಡಿ ನುಡಿ ಇಂಪು
ಹಡೆದವ್ವ್ನ ನೆನಪು ನೂರ್ಕಾಲ

ತೌರೂರ ಬಾಳೆ
ತೊಯ್ದಾಟ ನೋಡು
ಕಣ್ಣೂರ ಮನೆಯಲ್ಲಿ
ಹನಿಗೂಡಿ ಹಾಡು
ಕಣ್ಣಕಾಡಿಗೆಗಿಂತ
ಮಣ್ಣವಾಸನೆ ಚೆಂದ
ಮಣ್ಣಿನ ಮಗಳ
ಮನಚೆಂದ
ಹಡೆದವ್ನ ನೆನಪು ನೂರ್ಕಾಲ

ಮೆದು ನುಡಿಯಲಿ
ಮರಳು ಮಾಡಿ ಮೃಷ್ಟಾನ ರುಚಿ
ತಣ್ಣೆಯನ್ನಕೆ ನೀಡಿ
ಉಣ್ಣಿಸಿದ ನೆನಪು ನೂರ್ಕಾಲ
ಕಂಕುಳಲಿ ಏರಿ ತೋಳಿಗೆ
ಜೋತಾಡಿ
ಕಾಡಿ ಬೇಡಿದ ನೆನಪು ನೂರ್ಕಾಲ
ಎರಡೇಟು ಹಿಂಗಾಲ್ಗೆ ಬಿಗಿದು
ಬಾಸುಂಡೆ ಬರೆ ಮುಂಗೈಗೆ ಎಳೆದು
ಬಗ್ಗಿ ನಡೆಯಲು ಕಲಿಸೆ
ಜಗ್ಗದೇ ಕಾಡಿದ ನೆನಪು ನೂರ್ಕಾಲ

ಹಾಸಿಗೆಯೂ ಹಾಸಿತ್ತು
ದೀಪವೂ ಉರಿದಿತ್ತು.
ಕಣ್ಣೂರ ಕೋಡಿಯೂ ಹರಿದಿತ್ತು
ತಾಯವ್ವನ ನಿರ್ಜೀವ ದೇಹವೂ ಮಲಗಿತ್ತು
ಹಡೆದವ್ವನ ನೆನಪು ನೂರ್ಕಾಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಯೋತ್ಪಾದಕರು
Next post ವಿಜಯ ವಿಲಾಸ – ತೃತೀಯ ತರಂಗ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys